ವಿದ್ಯಾರ್ಥಿನಿಯ ಗುಪ್ತಾಂಗಕ್ಕೆ ಸ್ಯಾನಿಟೈಸರ್ ಹಾಕಿ ಬೆಂಕಿ ಹಚ್ಚಿದ ಯುವಕ!

ಗುರುಗ್ರಾಮ್: ಲಿವ್-ಇನ್ ಸಂಗಾತಿ 19 ವರ್ಷದ ವಿದ್ಯಾರ್ಥಿನಿಗೆ ದ್ರೋಹ ಮಾಡಿದ್ದಲ್ಲದೆ ಕ್ರೂರ ಚಿತ್ರಹಿಂಸೆಗೆ ಒಳಪಡಿಸಲಾಗಿದೆ. ಆರೋಪಿ ತನ್ನ ಸಂಗಾತಿಯ ದೇಹದ ಮೇಲೆ ಸ್ಯಾನಿಟೈಸರ್ ಸುರಿದು ಬೆಂಕಿ ಹಚ್ಚಿದ್ದಾನೆ. ಗುರುಗ್ರಾಮ್ ಪೊಲೀಸರು ಆರೋಪಿ ಶಿವಮ್ ಎಂಬಾತನನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ತ್ರಿಪುರ ನಿವಾಸಿಯಾಗಿರುವ ಸಂತ್ರಸ್ತೆಗೆ ದೆಹಲಿಯ ಸಫ್ದರ್ಜಂಗ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಆಕೆಗೆ ತೀವ್ರ ಸುಟ್ಟಗಾಯಗಳಾಗಿದ್ದು, ಚಿಕಿತ್ಸೆ ಮುಂದುವರೆದಿದೆ ಎಂದು ವೈದ್ಯರು ತಿಳಿಸಿದ್ದಾರೆ. ತ್ರಿಪುರಾ ಬಾಲಕಿ ದೆಹಲಿಯ ಸಫ್ದರ್ಜಂಗ್ ಆಸ್ಪತ್ರೆಯಲ್ಲಿ ಜೀವಕ್ಕಾಗಿ ಹೋರಾಡುತ್ತಿದ್ದಾಳೆ. ಈ ಮಧ್ಯೆ ಆಕೆಯ ತಾಯಿಗೆ ಸಮಾಧಾನ […]
ಮಂಗಳೂರು | ದೈಹಿಕ ಹಲ್ಲೆ, ಮಾನಸಿಕ ನಿಂದನೆ: ಕಾಂಗ್ರೆಸ್’ಗೆ ನವನೀತ್ ಉಳ್ಳಾಲ್ ರಾಜೀನಾಮೆ

ಮಂಗಳೂರು: ಕಾಂಗ್ರೆಸ್ ಪಕ್ಷದ ಪ್ರಾಥಮಿಕ ಸದಸ್ಯತನಕ್ಕೆ ರಾಜೀನಾಮೆ ಸಲ್ಲಿಸಿದ ಯುವ ನಾಯಕ ನವನೀತ್ ಉಳ್ಳಾಲ್ ರಾಜೀನಾಮೆ ಸಲ್ಲಿಸಿದ್ದಾರೆ. ಅವರ ರಾಜೀನಾಮೆ ಪತ್ರದಲ್ಲಿ. ನಾನು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ನ ಉಳ್ಳಾಲ ಬ್ಲಾಕ್ ಕಾಂಗ್ರೆಸ್ ನಲ್ಲಿ ಕಳೆದ ಒಂದುವರೆ ವರ್ಷಗಳಿಂದ ಅತ್ಯಂತ ನಿಷ್ಠೆ ಹಾಗೂ ಪ್ರಾಮಾಣಿಕತೆಯಿಂದ ಪ್ರಾಥಮಿಕ ಸದಸ್ಯ ಹಾಗೂ ಕಾರ್ಯಕರ್ತನಾಗಿ ಸೇವೆ ಸಲ್ಲಿಸುತ್ತಿದ್ದೇನೆ. ಆದರೆ ಕಳೆದ ಕೆಲವು ತಿಂಗಳುಗಳಿಂದ ನನ್ನ ವಿರುದ್ಧ ಮಾರಣಾಂತಿಕ ಹಲ್ಲೆಗೆ ಷಡ್ಯಂತ್ರ, ಪಿತೂರಿ, ಕೊಲೆ ಸಂಚನ್ನು ಸ್ವಪಕ್ಷದ ಬ್ಲಾಕ್ ನಾಯಕರುಗಳಾದ ಉಸ್ಮಾನ್ ಕಲ್ಲಾಪು, […]
ಚಿನ್ನಾಭರಣ ಕಳವು ಆರೋಪ: ನಾನು ಚಿನ್ನ ಕದ್ದಿಲ್ಲ, ಕುರಾನ್ ಮೇಲೆ ಕೈಯಿಟ್ಟು ಹೇಳಿದರೂ ಕೇಳುತ್ತಿಲ್ಲ; ಎರಡು ಮಕ್ಕಳ ತಾಯಿ ವಿಡಿಯೋ ಮಾಡಿಟ್ಟು ಆತ್ಮಹತ್ಯೆ

ಕಾಸರಗೋಡು: ಕಳ್ಳತನ ದೂರಿನಲ್ಲಿ ತನ್ನ ಹೆಸರು ಉಲ್ಲೇಖಿಸಲ್ಪಟ್ಟಿದ್ದರಿಂದ ಮಾನಸಿಕವಾಗಿ ನೊಂದ ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವರದಿಯಾಗಿದೆ. ಮೃತರು ಕಾಸರಗೋಡು ಆಲಂಬಾಡಿಯ ನಲ್ತಡುಕ್ಕದ ಜಸೀಲಾ. ಇತ್ತೀಚೆಗೆ ನಡೆದ ಚಿನ್ನ ಕಳ್ಳತನ ದೂರಿನಲ್ಲಿ ಜಸೀಲಾ ಅವರ ಹೆಸರು ಇತ್ತು. ಘಟನೆಯಲ್ಲಿ ವಿಚಾರಣೆಗೆ ಅವರನ್ನು ಕರೆಸಲಾಗಿದ್ದರೂ ಪ್ರಕರಣ ದಾಖಲಾಗಿಲ್ಲ. ಜಸೀಲಾ ಅವರ ಸ್ನೇಹಿತೆ ಮನೆಯಿಂದ ಒಂಬತ್ತು ಪವನ್ ಚಿನ್ನದ ತುಂಡುಗಳು ಕಾಣೆಯಾಗಿವೆ ಎಂದು ದೂರು ದಾಖಲಿಸಿದ್ದಾರೆ ಎಂದು ವರದಿ ಉಲ್ಲೇಖಿಸಿದೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ಜಸೀಲಾ ಅವರ ಮರಣದ ಹೇಳಿಕೆಯನ್ನು […]
ಮಂಗಳೂರು: Ludo ಆಟದ ಕಾಯ್ನ್ ನುಂಗಿ ಬಾಲಕಿ ಸಾವು

ಉಳ್ಳಾಲ: ಮನೆಯಲ್ಲಿ ಲ್ಯುಡೊ ಆಟದಲ್ಲಿ ತೊಡಗಿದ್ದ ಎಂಟು ವರ್ಷದ ಬಾಲಕಿ ಆಟಕ್ಕೆ ಬಳಸುವ ಶಂಕಾಕೃತಿಯ ಪ್ಲಾಸ್ಟಿಕ್ ಕಾಯ್ನ್ ಅನ್ನು ನುಂಗಿ ಉಸಿರುಗಟ್ಟಿ ಸಾವನ್ನಪ್ಪಿರುವ ಘಟನೆ ತೊಕ್ಕೊಟ್ಟು ಸಮೀಪದ ಕೊಲ್ಯ ಎಂಬಲ್ಲಿ ಶನಿವಾರ ನಡೆದಿದೆ. ಕಾಸರಗೋಡು ಜಿಲ್ಲೆಯ ಮಧೂರು ಉಳಿಯತಡ್ಕ ನಿವಾಸಿ ರಾಜೇಶ್ ಗಟ್ಟಿ ಮತ್ತು ರಾಜೇಶ್ವರಿ ದಂಪತಿಯ ಎರಡನೇ ಪುತ್ರಿ ತನುಷ್ಕಾ ಮೃತ ದುರ್ದೈವಿ. ತನುಷ್ಕಾ ತಾಯಿ ಉಳ್ಳಾಲದ ಶಾಲೆಯೊಂದರಲ್ಲಿ ಶಿಕ್ಷಕಿಯಾಗಿದ್ದು ಉದ್ಯೋಗಕ್ಕೆ ತೆರಳಲು ಅನುಕೂಲವಾಗುವಂತೆ ಕೊಲ್ಯದ ಬಾಡಿಗೆ ಮನೆಯಲ್ಲಿ ನೆಲೆಸಿದ್ದರು. ಶನಿವಾರ ಮಧ್ಯಾಹ್ನ ಶಾಲೆಗೆ ರಜೆ […]
ಟೆಕ್ಕಿ ಸಾವಿಗೆ ಬಿಗ್ ಟ್ವಿಸ್ಟ್: ಯುವಕನ ಕಾಮೋನ್ಮಾದಕ್ಕೆ ಶರ್ಮಿಳಾ ಬಲಿ

ಬೆಂಗಳೂರು: ಬೆಂಗಳೂರಿನ ರಾಮಮೂರ್ತಿ ಇದೇ ಜನವರಿ 16ರಂದು ನಡೆದಿದ್ದ ಸಾಫ್ಟ್ವೇರ್ ಇಂಜಿನಿಯರ್ ಮಂಗಳೂರು ಮೂಲದ ಶರ್ಮಿಳಾ ಅವರ ನಿಗೂಢ ಸಾವು ಪ್ರಕರಣಕ್ಕೆ ತಿರುವು ಸಿಕ್ಕಿದೆ. ಅತ್ಯಾಚಾರಕ್ಕೆ ಯತ್ನಿಸಿ ವಿಫಲನಾದ ನೆರೆಮನೆಯ 18 ವರ್ಷದ ಯುವಕನೇ ಆಕೆಯನ್ನು ಕೊಲೆ ಮಾಡಿರುವುದು ತನಿಖೆಯಲ್ಲಿ ಬಯಲಾಗಿದೆ. ಬಳಿಕ ಪೊಲೀಸರು ಮತ್ತಷ್ಟು ತನಿಖೆ ನಡೆಸಿದಾಗ ಆರೋಪಿ ಕರ್ನಲ್ ಕುರೈ ತನ್ನ ವಿಕೃತ ಮನಸ್ಥಿತಿಯನ್ನು ಬಿಚ್ಚಿಟ್ಟಿದ್ದಾನೆ. ಶರ್ಮಿಳಾ ಫ್ಲಾಟ್ ಗೆ ನುಗ್ಗುವ ಮುನ್ನ ನಾಲ್ಕೈದು ಬಾರಿ ರೆಕ್ಕಿ ಮಾಡಿದ್ದನಂತೆ. ಇದು ಸುಲಭವಾಗಿ ಶರ್ಮಿಳಾ ಮನೆಗೆ […]
ಬಾಗಲಕೋಟೆ ಕಲ್ಲು ತೂರಾಟ; ತಪ್ಪಿತ್ತಸ್ಥರ ವಿರುದ್ಧ ಕಠಿಣ ಕ್ರಮ: ಸಿಎಂ ಸಿದ್ದರಾಮಯ್ಯ

ಬೆಂಗಳೂರು: ‘ಬಾಗಲಕೋಟೆಯಲ್ಲಿ ನಡೆದ ಕಲ್ಲು ತೂರಾಟ ಘಟನೆಯು ಸಮಾಜದ ಶಾಂತಿ, ಸೌಹಾರ್ದತೆಗೆ ಮಾರಕವಾಗಿದ್ದು ಇದನ್ನು ನಾನು ಮತ್ತು ನಮ್ಮ ಸರ್ಕಾರ ಬಲವಾಗಿ ಖಂಡಿಸುತ್ತದೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ‘ಘಟನೆಯ ಬಗ್ಗೆ ಹಿರಿಯ ಪೊಲೀಸ್ ಅಧಿಕಾರಿಗಳ ಬಳಿ ಚರ್ಚಿಸಿದ್ದು, ನಿಷ್ಪಕ್ಷಪಾತ ತನಿಖೆ ನಡೆಸಿ, ದುಷ್ಕೃತ್ಯ ಎಸಗಿದ ಪುಂಡರಿಗೆ ಕಾನೂನಿನ ಮೂಲಕ ತಕ್ಕ ಉತ್ತರ ನೀಡುವಂತೆ ಸೂಚನೆ ನೀಡಿದ್ದೇನೆ’ ಎಂದು ಹೇಳಿದ್ದಾರೆ. ‘ಈಗಾಗಲೇ ಪ್ರಕರಣದ ಸಂಬಂಧ ಕೆಲವು ಆರೋಪಿಗಳನ್ನು ಬಂಧಿಸಿ, ವಿಚಾರಣೆಗೆ ಒಳಪಡಿಸಲಾಗುತ್ತಿದ್ದು, ಘಟನೆಗೆ ಕಾರಣರಾದ ಪ್ರತಿಯೊಬ್ಬರಿಗೂ ಶಿಕ್ಷೆ ನಿಶ್ಚಿತ’ […]
ಝಕರಿಯಾ ಜೋಕಟ್ಟೆಗೆ Entrepreneur Middle Eastನ ʼThe 100 NRIʼs ಪಟ್ಟಿಯಲ್ಲಿ ಸ್ಥಾನ

ಜುಬೈಲ್ (ಸೌದಿ ಅರೇಬಿಯ): ದಕ್ಷಿಣ ಕನ್ನಡ ಜಿಲ್ಲೆಯ ಜೋಕಟ್ಟೆ ಮೂಲದ ಉದ್ಯಮಿ ಹಾಗೂ ALMUZAIN ಗಲ್ಫ್ ಸೌದಿ ಕಾಂಟ್ರಾಕ್ಟಿಂಗ್ ಕಂಪೆನಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮತ್ತು ಸಂಸ್ಥಾಪಕರಾದ ಝಕರಿಯಾ ಜೋಕಟ್ಟೆ ಅವರು Entrepreneur Middle Eastನ ಈ ವರ್ಷದ ಮಧ್ಯಪ್ರಾಚ್ಯದ ಪ್ರತಿಷ್ಠಿತ “The 100 NRIʼSʼ ” ಪಟ್ಟಿಯಲ್ಲಿಸ್ಥಾನ ಪಡೆದಿದ್ದಾರೆ. ಎಂಟ್ರಪ್ರೈನರ್ ಮಿಡ್ಲ್ ಈಸ್ಟ್ ಪ್ರಕಟಿಸುವ ವಾರ್ಷಿಕ ವಿಶೇಷ ಪಟ್ಟಿಯಲ್ಲಿ ವಿಶ್ವದ ವಿವಿಧ ಭಾಗಗಳಲ್ಲಿ ಸಾಧನೆ ಮಾಡಿರುವ 100 ಅತ್ಯುತ್ತಮ ಅನಿವಾಸಿ ಭಾರತೀಯ ಉದ್ಯಮಿಗಳನ್ನು ಗುರುತಿಸಲಾಗುತ್ತದೆ. ಈ […]
ಮಂಗಳಮುಖಿ ಜತೆ ಐದು ವರ್ಷಗಳಿಂದ ಲವ್-ಅಫೇರ್; ಈಗ ಸುಹಾಸಿನಿ ಕೊಂದು ತಾನೂ ಸಾವಿಗೆ ಶರಣಾದ ಪಾಗಲ್ ಪ್ರೇಮಿ

ಮಂಗಳಮುಖಿ ಅಂತ ಗೊತ್ತಿದ್ರೂ ಯುವಕನೊಬ್ಬ ಐದು ವರ್ಷಗಳಿಂದ ಪ್ರೀತಿಯಲ್ಲಿ ಬಿದ್ದಿದ್ದ. ಇದೀಗ ಮಂಗಳಮುಖಿ ಸುಹಾಸಿನಿಯನ್ನು ಕೊಂದು ಆ ಪಾಗಲ್ ಪ್ರೇಮಿ ಶೇಖರ್ ತಾನೂ ಆತ್ಮ*ಹತ್ಯೆ ಮಾಡಿಕೊಂಡ ಘಟನೆ ಬಳ್ಳಾರಿ ನಗರದ ಮೇದಾರ ಕೇತಯ್ಯ ಮಗರದ ಮನೆಯಲ್ಲಿ ಈ ಘಟನೆ ನಡೆದಿದೆ. 29 ವರ್ಷದ ಮಂಗಳಮುಖಿ ಸುಹಾಸಿನಿಯನ್ನು 27 ವರ್ಷದ ಶೇಖರ್ ಲವ್ ಮಾಡುತ್ತಿದ್ದ. ಇದೀಗ ಇಬ್ಬರೂ ಸಾವನ್ನಪ್ಪಿದ್ದು, ಆತ್ಮ*ಹತ್ಯೆ ಸಂಖ್ಯೆ ವ್ಯಕ್ತವಾಗಿದೆ. ಹಣದ ವಿಚಾರಕ್ಕೆ ಈ ಇಬ್ಬರೂ ಕೆಲ ದಿನಗಳ ಹಿಂದೆ ಬೇರೆ-ಬೇರೆಯಾಗಿದ್ದರು ಎನ್ನಲಾಗುತ್ತಿದೆ. ನಿನ್ನೆ ರಾತ್ರಿ […]
ಘರ್ ವಾಪಸಿ ಹೇಳಿಕೆ ದೇಶಕ್ಕೆ ಅಪಾಯ: ಮೋಹನ್ ಭಾಗವತ್ ವಿರುದ್ಧ ಕಿಡಿಕಾರಿದ ಮದನಿ

ರಾಷ್ಟ್ರೀಯ ಸ್ವಯಂಸೇವಕ ಸಂಘ (RSS) ಮುಖ್ಯಸ್ಥ ಮೋಹನ್ ಭಾಗವತ್ ಅವರ ‘ಘರ್ ವಾಪಸಿ’ ಹೇಳಿಕೆಗೆ ಜಮಿಯತ್ ಉಲೇಮಾ-ಎ-ಹಿಂದ್ ಅಧ್ಯಕ್ಷ ಮೌಲಾನಾ ಅರ್ಷದ್ ಮದನಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇಂತಹ ಮಾತುಗಳು ದೇಶದಲ್ಲಿ ದ್ವೇಷವನ್ನು ಹರಡುತ್ತವೆ ಮತ್ತು ಸಂವಿಧಾನದ ಮೌಲ್ಯಗಳಿಗೆ ಅಪಾಯವನ್ನುಂಟುಮಾಡುತ್ತವೆ ಎಂದು ಅವರು ಎಚ್ಚರಿಸಿದ್ದಾರೆ. ಬುಧವಾರ ‘X’ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡ ಮದನಿ, ’20 ಕೋಟಿ ಮುಸ್ಲಿಮರ ಘರ್ ವಾಪಸಿ ಮಾಡಿಸಲಾಗುವುದು’ ಎಂಬಂತಹ ಮಾತುಗಳು ಕಳೆದ 70 ವರ್ಷಗಳಲ್ಲಿ ಕೇಳಿಬಂದಿರಲಿಲ್ಲ. ಇದು ಅತ್ಯಂತ ಆತಂಕಕಾರಿ ಬೆಳವಣಿಗೆ […]
ದೇರಳಕಟ್ಟೆಯಲ್ಲಿ ರಂಜಾನ್ ತಿಂಗಳಿನಲ್ಲಿ ಪ್ರತಿ ದಿನ 600 ಕ್ಕೂ ಮಿಕ್ಕ ಜನರಿಗೆ ಇಫ್ತಾರ್ ವ್ಯವಸ್ಥೆ

ಮಂಗಳೂರು: ದೇರಳಕಟ್ಟೆಯಲ್ಲಿ ರಂಜಾನ್ ತಿಂಗಳಿನಲ್ಲಿ ಪ್ರತಿ ದಿನ 600 ಕ್ಕೂ ಮಿಕ್ಕ ಜನರಿಗೆ ಇಫ್ತಾರ್ ವ್ಯವಸ್ಥೆ ಮಾಡಲಾಗಿದೆ. ದೇರಳಕಟ್ಟೆ ಬದ್ರಿಯಾ ಜುಮಾ ಮಸ್ಜಿದ್ ವತಿಯಿಂದ ಪ್ರತಿ ವರ್ಷವೂ ಇಫ್ತಾರ್ ಕೂಟ ಕಾರ್ಯಕ್ರಮ ನಡೆಸುತ್ತಾಬಂದಿದ್ದೇವೆ.ಪ್ರತೀ ವರ್ಷವೂ ರಂಜಾನ್ ತಿಂಗಳಿನಲ್ಲಿ 600 ರಿಂದ 1000 ಜನರಿಗೆ ಇಫ್ತಾರ್ ವ್ಯವಸ್ಥೆ ಮಾಡುತ್ತಾ ಬಂದಿದ್ದೇವೆ. ಬದ್ರಿಯಾ ಜುಮಾ ಮಸೀದಿ ದೇರಳಕಟ್ಟೆಯಸಿಟಿ ಭಾಗದ ಮಸೀದಿಯಾದ ಕಾರಣ. ಆಸುಪಾಸಿನ ಅಂಗಡಿ ಮಾಲಕರು ರಿಕ್ಷಾ ಚಾಲಕರು ಕಾಲೇಜು ವಿದ್ಯಾರ್ಥಿಗಳು ಸಾರ್ವಜನಿಕರು ಎಲ್ಲರೂ ದೇರಳಕಟ್ಟೆ ಬದ್ರಿಯಾ ಮಸೀದಿಗೆ ಇಫ್ತಾರ್ […]