ಮಂಗಳೂರು: ದಾರುನ್ನೂರ್ ಎಜುಕೇಶನಲ್ ಸೆಂಟರ್ ಕಾಶಿಪಟ್ನ ಇದರ ನೂತನ ಉಪಾಧ್ಯಕ್ಷರಾಗಿ ಉದ್ಯಮಿ ಡಾ. ಅಬ್ದುಲ್ ಶಕೀಲ್ ಅವರು ಆಯ್ಕೆಯಾಗಿದ್ದಾರೆ.
ದಾರುನ್ನೂರ್ ಎಜುಕೇಶನಲ್ ಸೆಂಟರ್ ಕಾಶಿಪಟ್ನದ ಗೌರವಾಧ್ಯಕ್ಷರಾದ ಶೈಖುನಾ ತ್ವಾಖಾ ಉಸ್ತಾದ್ ಅವರು ನೇಮಕ ಪತ್ರವನ್ನು ನೀಡಿದರು.
ಈ ಸಂದರ್ಭದಲ್ಲಿ ದಾರುನ್ನೂರ್ ಎಜುಕೇಶನಲ್ ಇದರ ಅಧ್ಯಕ್ಷರಾದ ಶೇರಿಫ್ ಹಾಜಿ ಜೋಕಟ್ಟೆ ಮತ್ತು ಪದಾಧಿಕಾರಿಗಳು ಉಪಸ್ಥಿತರಿದ್ದರು.
ಹಲವಾರು ದೀನೀ ಸ್ಥಾಪನೆಗಳ ಹಿತೈಷಿಗಳು, ಯುವ ಉದ್ಯಮಿಯೂ ಆಗಿರುವ
ಡಾ ಅಬ್ದುಲ್ ಶಕೀಲ್ ದೇರಳಕಟ್ಟೆ ನಿಸ್ವಾರ್ಥ ಸಮಾಜ ಸೇವಕರೂ ಆಗಿದ್ದು, ಹಲವಾರು ಸಮಾಜಮುಖಿ ಕಾರ್ಯದಲ್ಲಿ ತೊಡಗಿದ್ದಾರೆ.



