Flash News

ಸೌದಿ ಅರೇಬಿಯಾ | ಭಾರತೀಯರು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ರಾಯಭಾರಿ ಡಾ. ಸುಹೇಲ್ ಐಜಾಝ್ ಖಾನ್ ಅವರೊಂದಿಗೆ ಝಕರಿಯಾ ಜೋಕಟ್ಟೆ ಸಭೆ

ರಿಯಾದ್: ಸೌದಿ ಅರೇಬಿಯಾದಲ್ಲಿ ವಾಸಿಸುತ್ತಿರುವ ಭಾರತೀಯರು ಎದುರಿಸುತ್ತಿರುವ ಸಮಸ್ಯೆಗಳು ಮತ್ತು ಸವಾಲುಗಳ ಕುರಿತು ಚರ್ಚಿಸಲು, ಸೌದಿ ಅರೇಬಿಯಾದಲ್ಲಿನ ಭಾರತೀಯ ರಾಯಭಾರ ಕಚೇರಿಯ ರಾಯಭಾರಿಯಾಗಿರುವ ಡಾ. ಸುಹೇಲ್ ಐಜಾಝ್ ಖಾನ್ ಅವರೊಂದಿಗೆ ಝಕರಿಯಾ ಜೋಕಟ್ಟೆ ಗೌರವಪೂರ್ವಕ ಸಭೆ ನಡೆಸಿದರು.

ಭಾರತೀಯ ಸಮುದಾಯದ ಹಕ್ಕುಗಳು, ಸುರಕ್ಷತೆ ಹಾಗೂ ಕಲ್ಯಾಣವನ್ನು ಗಮನದಲ್ಲಿಟ್ಟುಕೊಂಡು, ಭಾರತೀಯರು ಎದುರಿಸುತ್ತಿರುವ ಸಮಸ್ಯೆಗಳನ್ನು ಪರಿಹರಿಸಲು ತಕ್ಷಣ ಮತ್ತು ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳುವಂತೆ ಮನವಿ ಸಲ್ಲಿಸಲಾಯಿತು.

ಈ ವೇಳೆ ಅಲ್ ಮುಝೈನ್ ಕಂಪನಿಯ ಸಿಇಒ ಝಕರಿಯಾ ಜೋಕಟ್ಟೆ, ಸರ್ಫ್ರಾಜ್ ಸಿಇಒ ಗಲ್ಫ್ ಏಷ್ಯಾ ಮೆಡಿಕಲ್, ಅಯಾಜ್ ಸಿಇಒ ರೈಟ್ ಚಾಯ್ಸ್, ಅಮ್ಜತ್ ಪೋಲ್ಯ ಸಿಇಒ ರಕ್ವಾನಿ ಗ್ರೂಪ್, ದಿನೇಶ್ ಹೊಳ್ಳ ಸಿಇಒ ಅಲ್ಬಿಲಾದ್ ಅಗ್ನಿಶಾಮಕ. ಸತೀಶ್ ಕುಮಾರ್ ಬಜಾಲ್, ಗೋಪಾಲ್ ಶೆಟ್ಟಿ ಉಪಸ್ಥಿತರಿದ್ದರು.